ಮಹಾಶರಣ ಹರಳಯ್ಯ ಈ ವಾರ ಬಿಡುಗಡೆ
Posted date: 09 Thu, Jan 2014 – 08:58:55 AM
ಭಾಗ್ಯೋದಯ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಎ. ದೇವರಾಜ್ ನಿರ್ಮಿಸಿರುವ ಮಹಾಶರಣ ಹರಳಯ್ಯ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  ಹನ್ನೆರಡನೇ ಶತಮಾನದಲ್ಲಿಯೇ ಅಸ್ಪೃಶ್ಯತೆ ನಿವಾರಣೆಗಾಗಿ ಹೋರಾಡಿದ ಕ್ರಾಂತಿಪುರುಷ ಬಸವಣ್ಣನವರ ಅನುಯಾಯಿಗಳಲ್ಲಿ ಒಬ್ಬರಾದ ಹರಳಯ್ಯನವರ ಕಥೆ ಆಧಾರಿತ ಚಿತ್ರ.

ಬಿ.ಎ.ಪುರಷೋತ್ತಮ್ (ಓಂಕಾರ್) ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗೌರಿವೆಂಕಟೇಶ್ ಛಾಯಾಗ್ರಹಣ, ಜಿಮ್ಮಿರಾಜ್ ಸಂಗೀತ, ಹೈಟ್‌ಮಂಜು ನೃತ್ಯ, ಎಸ್. ಕುಮಾರ್ ಸಂಕಲನ, ಓಂಕಾರ್ ಸಾಹಿತ್ಯ, ಇಸ್ಮಾಯಿಲ್ ಕಲಾನಿರ್ದೇಶನ, ಕೆ.ವಿ.ರವಿಚಂದ್ರ, ರಾಮಕೃಷ್ಣ, ರಮೇಶ್‌ಭಟ್, ರಾಜು(ಡಿಂಗ್ರಿ), ವಿಕ್ರಂ ಉದಯ್‌ಕುಮಾರ್, ಜಯಲಕ್ಷ್ಮಿ, ಶೀಲಾ, ಸುಮಿತ್ರ ಅಭಿನಯಿಸಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed